ಒಟ್ಟು ೫೦ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣ; ಆರ್ವಿನ್


ಸುರಪುರ : ಇಲ್ಲಿಯ ಪತ್ರಕರ್ತರ ಬಹುದಿನದ ಬೇಡಿಕೆಯಾಗಿರುವ ಪತ್ರಿಕಾ ಭವನವನ್ನು ೫೦ ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗುವುದು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ಇಲ್ಲಿಯ ಪತ್ರಿಕಾ ಭವನದ ಮುಂದುವರಿದ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ  ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನವನ್ನು ಗುಣಮಟ್ಟದೊಂದಿಗೆ ಅಚ್ಚುಕಟ್ಟಾಗಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಗ್ರಾಮೀಣ ಮೂಲಭೂತ ಸೌಕರ್ಯ ನಿಗಮ ನಿಯಮಿತದ ಅಧಿಕಾರಿಗೆ ಸೂಚನೆ ನೀಡಿದರು.
ಪತ್ರಿಕಾ ಭವನ ನಿರ್ಮಾಣದಿಂದ ಪತ್ರಕರ್ತರಿಗೆ ಸುದ್ದಿಗೋಷ್ಠಿ ಸೇರಿ ಅವರ ಇನ್ನಿತರ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುತ್ತದೆ. ಪತ್ರಿಕಾ ಭವನದ ಕಟ್ಟಡ ಕಾಮಗಾರಿ ಬೇಗನೆ ಮಾಡಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಪುನರುಚ್ಚರಿಸಿದ ಶಾಸಕರು, ಭವನ ನಿರ್ಮಾಣದ ನೀಲನಕ್ಷೆಯನ್ನು ಪರಿಶೀಲಿಸಿ ಕೆಲ ಸಲಹೆ ಸೂಚನೆಗಳನ್ನು ಅವರಿಗೆ ಕೊಟ್ಟರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಠ್ಠಲ ಯಾದವ, ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಶಕೀಲ್ ಅಹ್ಮದ್, ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ (ತಾತಾ), ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪರಿಷತ್ ಸದಸ್ಯ ರಾಘವೇಂದ್ರ ಕಾಮನಟಗಿ, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಕರ ಭಟ್ ಜೋಷಿ, ಗೌರವಾಧ್ಯಕ್ಷ ಗಿರೀಶ್ ಶಾಬಾದಿ, ಪ್ರಧಾನ ಕಾರ್ಯದರ್ಶಿ ಕ್ಷೀರಲಿಂಗಯ್ಯ ಹಿರೇಮಠ ಬೋನಾಳ, ಪತ್ರಕರ್ತರಾದ ಧೀರೇಂದ್ರ ಕುಲಕರ್ಣಿ, ಸಿದ್ದಯ್ಯ ಪಾಟೀಲ್, ಮಲ್ಲು ಗುಳಗಿ, ರಾಜು ಕುಂಬಾರ, ಹೊನ್ನಪ್ಪ ತೇಲ್ಕರ್, ಶ್ರೀಮಂತ ಚಲುವಾದಿ, ಕಲೀಂ ಫರೀದಿ, ಪರಶುರಾಮ ನಾಯಕ ಮಲ್ಲಿಬಾವಿ, ಪುರುಷೋತ್ತಮ ನಾಯಕ ದೇವತ್ಕಲ್, ಮೋಹನ ಪ್ರತಿಹಸ್ತ ದೇವಾಪುರ, ನಾಗರಾಜ ನ್ಯಾಮತಿ, ಥಾಮಸ್ ಮ್ಯಾಥ್ಯೂ.
ನಗರಸಭೆ ಸದಸ್ಯರಾದ ಶರೀಫ್ ಅಹ್ಮದ್, ಜುಮ್ಮಣ್ಣ ಕೆಂಗೂರಿ, ಸುವರ್ಣಾ ಸಿದ್ರಾಮ ಎಲಿಗಾರ, ಲಕ್ಷ್ಮೀ ಮಲ್ಲು ಬಿಲ್ಲವ್, ನಾಸೀರ್ ಹುಸೇನ್ ಕುಂಡಾಲೆ, ಕಮರುದ್ದೀನ್ ನಾರಾಯಣಪೇಠ, ಮೊಹ್ಮದ್ ಗೌಸ್ ಕಿಣ್ಣಿ, ಶಿವಕುಮಾರ ಕಟ್ಟಿಮನಿ, ಮಹಿಬೂಬ್, ಸೋಮರಾಯ ಶಖಾಪೂರ, ಪ್ರಕಾಶ ಅಲಬನೂರ, ಸಾಯಬಣ್ಣ ಮಡಿವಾಳರ. ಮುಖಂಡರಾದ ಮಲ್ಲಣ್ಣ ಸಾಹುಕಾರ ಮುಧೋಳ, ಅಬ್ದುಲ್ ಅಲೀಂ ಗೋಗಿ, ಗಾಳೆಪ್ಪ ಹಾದಿಮನಿ ಸೇರಿ ಇತರರಿದ್ದರು.
ಪತ್ರಿಕಾ ಭವನದ ನಿರ್ಮಾಣದ ಜತೆಯಲ್ಲಿ ಇನ್ನಿತರ ಮೂಲಸೌಕರ್ಯಗಳನ್ನು ಸರಕಾರದ ವತಿಯಿಂದ ಒದಗಿಸಿಕೊಡುವಂತೆ ಪತ್ರಕರ್ತರು ನನಗೆ ಮನವಿ ಮಾಡಿದ್ದಾರೆ. ಹೀಗಾಗಿ ಹಂತ ಹಂತವಾಗಿ ಅವರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ಸುರಪುರ ಪತ್ರಿಕಾ ಭವನದ ಮುಂದುವರೆದ ಕಾಮಗಾರಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೂಮಿ ಪೂಜೆ ನೆರವೇರಿಸಿದರು.
ಭೂಮಿ

Leave a Reply

Your email address will not be published. Required fields are marked *

error: Content is protected !!