ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ

ಸುರಪುರ ಟೈಮ್ಸ್ ವಾರ್ತೆ

ಸುರಪುರ :ನಗರದ ಪ್ರವಾಸಿ ಮಂದಿರ ಟೇಲರ್ ಮಂಜಿಲ್‌ನಲ್ಲಿ ಗಂಗಾಧರ ನಾಯಕ ತಿಂಥಣಿ ಅವರ ಅಧ್ಯಕ್ಷತೆಯಲ್ಲಿ ಸುರಪುರ ತಾಲೂಕು ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ಸಭೆ ಜರುಗಿ ನೌಕರರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮಹಾದೇವ ಬೊಮ್ಮನಳ್ಳಿ, ರವಿ ಪ್ರಕಾಶ, ಮೌನೇಶ ನಾಯಕ, ಹರೀಶ ನಾಯಕ, ಯಲ್ಲಪ್ಪ ಸೇರಿ ತಾಲೂಕಿನ ಸರಕಾರಿ ಹೊರಗುತ್ತಿಗೆ ನೌಕರರರು ಇದ್ದರು.

ಪದಾಧಿಕಾರಿಗಳ ಆಯ್ಕೆ

ಸಮಾಜ ಕಲ್ಯಾಣ ಇಲಾಖೆಯ ನಾಗರಾಜ ಜೂಗೂರು (ಅಧ್ಯಕ್ಷ), ಆರೋಗ್ಯ ಇಲಾಖೆಯ ಮಂಜುನಾಥ ಹೂಗಾರ (ಉಪಾಧ್ಯಕ್ಷ), ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸುನೀಲಕುಮಾರ ಪಂಚಾಂಗಮಠ (ಪ್ರಧಾನ ಕಾರ್ಯದರ್ಶಿ), ಕಂದಾಯ ಇಲಾಖೆಯ ಪ್ರವೀಣಕುಮಾರ (ಕಾರ್ಯದರ್ಶಿ).
ಆರೋಗ್ಯ ಇಲಾಖೆಯ ಮೊಹ್ಮದ್ ಹಸನ್, ಸಿಡಿಪಿಒ ಇಲಾಖೆಯ ಭೀಮಣ್ಣ (ಸಂಘಟನಾ ಕಾರ್ಯದರ್ಶಿ), ಪಿಡಬ್ಲೂಡಿ ಇಲಾಖೆಯ ನಾಗರಾಜ ನಾಯಕ, ಸಮಾಜ ಕಲ್ಯಾಣ ಇಲಾಖೆಯ ನಾಗಮ್ಮ ಜಾಲಹಳ್ಳಿ (ಸಹ ಸಂಘಟನಾ ಕಾರ್ಯದರ್ಶಿ), ಗೋವಿಂದಪ್ಪ ಗೌಡ (ಕಾರ್ಯಕಾರಿ ಸದಸ್ಯ), ಬಸವರಾಜ (ಖಜಾಂಚಿ).

ಫೋಟೊ : ಸುರಪುರ ತಾಲೂಕು ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ

Leave a Reply

Your email address will not be published. Required fields are marked *

error: Content is protected !!