ಇಂದು ಕಲಬುರಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕ್ ಚುನಾವಣೆಯತ್ತ ಎಲ್ಲರ ಚಿತ್ತ!

ಸುರಪುರ ಟೈಮ್ಸ್ ವಾರ್ತೆ

ಸುರಪುರ: ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಒಂಭತ್ತು ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನ.9ರಂದು ಬ್ಯಾಂಕಿನ ಅವರಣದಲ್ಲಿ ನಡೆಯಲಿದ್ದು, ಒಟ್ಟು 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿಸಿಸಿ ಬ್ಯಾಂಕ್ ನ ಒಟ್ಟು 13 ನಿರ್ದೇಶಕರ ಸ್ಥಾನಗಳಲ್ಲಿಈಗಾಗಲೇ ನಾಲ್ಕು ಸ್ಥಾನ ಅವಿರೋಧ ಆಯ್ಕೆಯಾಗಿವೆ. ಈಗ ಒಂಭತ್ತು ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದ್ದು, ತೀವ್ರ ಜಿದ್ದಾ ಜಿದ್ದಿನ ಕಣವಾಗಿದೆ. ಅಂತಿಮ ಕಣದಲ್ಲಿಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಲಯದಿಂದ ಅಫಜಲಪುರದಿಂದ ಅಜಯ, ರಾಜಕುಮಾರ, ಆಳಂದದಿಂದ ಅಶೋಕ, ಚಂದ್ರಶೇಖರ, ಚಿಂಚೋಳಿಯಿಂದ ಗೌತಮ್ , ಶೈಲೇಶ ಕುಮಾರ, ಚಿತ್ತಾಪುರದಿಂದ ಸಿದ್ದಪ್ಪಗೌಡ, ಸುನೀಲ ಕುಮಾರ, ಜೇವರ್ಗಿ ಯಿಂದ ಕೇದಾರಲಿಂಗಯ್ಯ, ಬಸವರಾಜ, ಕಲಬುರಗಿಯಿಂದ ಕಲ್ಯಾಣರಾವ್ ಮೂಲಗೆ, ಶರಣಬಸಪ್ಪ, ಸೇಡಂನಿಂದ ನಾಗೇಂದ್ರಪ್ಪ, ಶಂಕರಭೂಪಾಲ, ಸುರಪುರದಿಂದ ವಿಠಲ ಯಾದವ್ , ಶಾಂತಗೌಡ, ಇತರೆ ಸಹಕಾರ ಕ್ಷೇತ್ರಕ್ಕೆ ಜ್ಯೋತಿ, ಡಾ.ಸುರೇಶ ಆರ್ ಸಜ್ಜನ ಅಂತಿಮ ಕಣದಲ್ಲಿಉಳಿದಿದ್ದು, ಇವರು ತಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಲಿದ್ದಾರೆ.
ಮೊಬೈಲ್‌ ನಿಷೇಧ
ಮತದಾನ ಮಾಡಲು ಬರುವ ಮತದಾರರು ಮತ್ತು ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟ್‌ಗಳು ಮೊಬೈಲ್, ಪೆನ್ ಹಾಗೂ ಚುನಾವಣೆಯಲ್ಲಿ ನಿಷೇಧಿಸಿದ ಯಾವುದೇ ಸಾಮಗ್ರಿಗಳನ್ನು ಮತದಾನ ನಡೆಯುವ ಸ್ಥಳದಿಂದ 100 ಮೀಟರ್ ವ್ಯಾಪ್ತಿಯಲ್ಲಿ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಚುನಾವಣಾಧಿಕಾರಿ ಪ್ರಕಾಶ ಕುದರಿ ತಿಳಿಸಿದ್ದಾರೆ. ಮತದಾನದ ನಂತರ ಬ್ಯಾಂಕಿನ ಅವರಣದಲ್ಲಿಯೇ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ರಿಟನಿರ್ಂಗ್ ಅಧಿ ಕಾರಿಗಳು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!