ಸುರಪುರ ಬೃಹತ್ ತಿರಂಗಾ ರ‍್ಯಾಲಿ; ಮೊಳಗಿದ ದೇಶ ಭಕ್ತಿ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಭಾರತೀಯ ಸೇನೆಯ ಆಪರೇಷನ್ ಸಿಂದೂರ ಯಶಸ್ವಿಯಾಗಿರುವ ಹಿನ್ನೆಯಲ್ಲಿ ದೇಶದ ಸೈನಿಕರಿಗೆ ಗೌರವಿಸಲು ಸುರಪುರ ತಾಲೂಕು ದೇಶಭಕ್ತ ನಾಗರಿಕ ಸಮಿತಿ ಹಮ್ಮಿಕೊಂಡಿದ್ದ ಬೃಹತ್ ತಿರಂಗಾ ರ‍್ಯಾಲಿ ಬುಧವಾರ ಅದ್ಧೂರಿಯಾಗಿ ಜರುಗಿತು.

ನಗರದ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಿಂದ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಯಾತ್ರೆಗೆ ಚಾಲನೆ ನೀಡಲಾಯಿತು. ಮಾರುಕಟ್ಟೆ ಪ್ರದೇಶ, ರಾಜ ಬೀದಿ ಮಾರ್ಗವಾಗಿ ಮಹತ್ಮಾ ಗಾಂಧೀಜಿ ವೃತ್ತದವರೆಗೂ ಜರುಗಿ ಅಲ್ಲಿ ಸಮಾವೇಶಗೊಂಡಿತು. ವಿವಿಧ ಮಠಾಧೀಶರು, ಮಾಜಿ ಸೈನಿಕರು, ಎನ್‌ಸಿಸಿ, ಗೃಹರಕ್ಷ ದಳ, ವಿವಿಧ ಧರ್ಮ, ಜಾತಿ, ಪಕ್ಷ, ಸಂಘ, ಸಂಸ್ಥೆಗಳು ಮುಖಂಡರು, ದೇಶಾಭಿಮಾನಿಗಳು, ಮಕ್ಕಳು. ಯುವಕರು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಪಕ್ಷಾತೀತವಾಗಿ ಭಾಗವಹಿಸಿದ್ದರು.

ತಿರಂಗಾ ಯಾತ್ರೆಯ ವೇಳೆ ಕೈಯಲ್ಲಿ ತ್ರಿವಣ ಧ್ವಜ ಹಿಡಿದು ಸಾಗಿ ದೇಶ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ವೀರ ಯೋಧರಿಗೆ ಕೃತಜ್ಞತೆ ಸಲ್ಲಿಸಿ ಬೆಂಬಲ ಸೂಚಿಸಿದರು. ಭಾರತ್ ಮಾತಾ ಕಿ ಜೈ..ಜೈ ಜವಾನ್ ಜೈ ಕಿಸಾನ್, ಜಮ್ಮು-ಕಾಶ್ಮೀರ ಭಾರತ ಮಾತಾ ಕೀ ಸಿಂದೂರ ಹೈ-ಹೀಗೆ ದೇಶ ಭಕ್ತಿಯ ನಾನಾ ಘೋಷಣೆಗಳನ್ನು ಮೊಳಗಿಸಿದರು.ಶತ್ರು ರಾಷ್ಟ್ರ ಪಾಕಿಸ್ತಾನದ ವಿರುದ್ದ ಘೋಷಣೆ ಹಾಕಿದರು. ನಂತರ ಗಾಂಧೀಜಿ ವೃತ್ತದಲ್ಲಿ ನಿವೃತ್ತ ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ನಿವೃತ್ತ ಯೋಧರು ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಗಳು ಈ ದೇಶದ ಮಣ್ಣು ಮತ್ತು ಸೈನಿಕರನ್ನು ಪ್ರೀತಿಸಬೇಕು. ಗೌರವಿಸಬೇಕು. ಸೈನಿಕರಿಗೆ ಗೌರವಿಸುವುದು ಎಲ್ಲರ ಕರ್ತವ್ಯ. ನಮಗೆ ದೇಶ ಮೊದಲು. ನಮ್ಮ ಸೈನಿಕರು ಧೈರ್ಯ, ಪರಾಕ್ರಮಕ್ಕೆ ಹೆಸರುವಾಸಿ. ಸೈನಿಕರ ಜತೆ ಪ್ರತಿಯೊಬ್ಬರು ಸದಾ ಬೆನ್ನೆಲುಬಾಗಿ ನಿಲ್ಲಬೇಕು.ಅವರಿಗಾಗಿ ತಿರಂಗಾ ಯಾತ್ರೆ ನಡೆಸುತ್ತಿರುವುದು ಅರ್ಥಪೂರ್ಣ ಕಾರ್ಯವಾಗಿದೆ ಇಂದು ಭಾರತೀಯ ಸೇನೆಯ ಶೌರ್ಯ, ಸಾಹಸವನ್ನು ಇಡೀ ಜಗತ್ತೇ ನೋಡಿದೆ ಎಂದರು.ಗೊಲ್ಲಪಲ್ಲಿ ವಾಲ್ಮೀಕಿ ಪೀಠದ ವರದಾನಂದ ಮಹಾ ಸ್ವಾಮೀಜಿ, ಲಕ್ಷ್ಮೀಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ರುಕ್ಯಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ, ಫಾದರ್‌ಗಳಾದ ಪ್ರಕಾಶ ಹಂಚಿನಾಳ, ಅನು ದಿಲೀಪ್, ಮಾಜಿ ಸಚಿವ
ರಾಜುಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ನಾಯಕ ಬಿಚ್ಚಗತ್ತಕೇರಿ, ಶರಣುನಾಯಕ ಡೊಣ್ಣಿಗೇರೆ, ಪ್ರಮುಖರಾದ ದೇವಿಂದ್ರ ನಾದ, ಟಿ.ಎನ್.ನಾಯಕ, ಭೀಮನಗೌಡ ಲಕ್ಷ್ಮೀ ಹೆಮನೂರು, ಸಂದೀಪ ಜೋಶಿ, ರಾಜಾ ಹನುಮಪ್ಪ ನಾಯಕ, ಸುರೇಶ್ ಸಜ್ಜನ್, ಮಂಜುನಾಥ ಚೆಟ್ಟಿ, ಭೀಮುನಾಯಕ ಮಲ್ಲಿಬಾವಿ, ವೇಣುಗೋಪಾಲ ಜೇವರ್ಗಿ, ಯಲ್ಲಪ್ಪ ದೇವತ್ಕಲ್, ನಾಗರಾಜ ಪ್ಯಾಪಲಿ, ನಿಂಗಣ್ಣ ಬಿಜಾಸಪುರ, ಹೆಚ್.ಸಿ.ಪಾಟೀಲ್, ದೇವಿಂದ್ರಪ್ಪ ಬೇವಿನಕಟ್ಟಿ, ಸಂಗಣ್ಣ ಶರಣುನಾಯಕ ಬೈರಿಮಡ್ಡಿ, ರಾಜಾ ರಂಗಪ್ಪ ನಾಯಕ, ವೈಲಿ, ಬಸವರಾಜ ಮೇಲಿನಮನಿ, ನರಸಿಂಹಕಾಂತ ರಾಜಾ ಜೈರಾಮ ನಾಯಕ, ಭೀಮಣ್ಣ ಬೇವಿನಾಳ, ಪಂಚಮಗಿರಿ, ಗುರು ಕಾಮಾ, ಮೇಲಪ್ಪ ಗುಳಗಿ, ಶಂಕರ ಮಲ್ಲು ಕವಡಿಮಟ್ಟಿ, ಶ್ರೀಶೈಲ ಕೆಂಭಾವಿ, ಯಲ್ಲಪ್ಪ ನಾಯಕ, ಸಿದ್ಧನಗೌಡ ಕರಿಬಾವಿ, ರಾಜು ಹವಲ್ದಾರ, ಹುಲಕಲ್, ಶ್ರೀನಿವಾಸ ದರಬಾರಿ, ಚಂದ್ರು ಮಡಿವಾಳರ, ಬಲಭೀಮ ನಾಯಕ ಬೈರಿಮಡ್ಡಿ, ಡಾ.ಉಪೇಂದ್ರ ನಾಯಕ ಸಂಗನಗೌಡ ಪಾಟೀಲ್ ಹಣಮಗೌಡ ಶಖಾಪುರ, ಸುಬೇದಾ‌ರ್, ವೆಂಕಟೇಶನಾಯಕ ಬೈರಿಮಡ್ಡಿ, ಲಕ್ಷ್ಮೀಕಾಂತ ಶ್ರೀಶೈಲ ಕಾಚಾಪುರ, ದೇವಿಂದ್ರಪ್ಪಗೌಡ ಮಾಲಗತ್ತಿ ಸೇರಿ ಬಿರಾದಾರ್ ದೇವರಗೋನಾಲ, ಗಂಗಾಧರ ನಾಯಕ ಕನ್ನಡ ಪರ ಸಂಘಟನೆಯವರು, ಅಲ್ಪ ಸಂಖ್ಯಾತ ಅರಳಹಳ್ಳಿ, ಮೌನೇಶ ದೇವರಗೋನಾಲ, ಶರಣು ಮುಖಂಡರು ಸೇರಿ ಅನೇಕರಿದ್ದರು

ಅವರಿಗಾಗಿ ತಿರಂಗಾ ಯಾತ್ರೆ ನಡೆಸುತ್ತಿರುವುದು ಅರ್ಥಪೂರ್ಣ ಕಾರ್ಯವಾಗಿದೆ ಇಂದು ಭಾರತೀಯ ಸೇನೆಯ ಶೌರ್ಯ, ಸಾಹಸವನ್ನು ಇಡೀ ಜಗತ್ತೇ ನೋಡಿದೆ ಎಂದರು.ಗೊಲ್ಲಪಲ್ಲಿ ವಾಲ್ಮೀಕಿ ಪೀಠದ ವರದಾನಂದ ಮಹಾ ಸ್ವಾಮೀಜಿ, ಲಕ್ಷ್ಮೀಪುರದ ಶ್ರೀಗಿರಿ ಸಂಸ್ಥಾನ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ,  ಫಾದರ್‌ಗಳಾದ ಪ್ರಕಾಶ ಹಂಚಿನಾಳ, ಅನು ದಿಲೀಪ್, ಮಾಜಿ ಸಚಿವ
ರಾಜುಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ನಾಯಕ ಬಿಚ್ಚಗತ್ತಕೇರಿ, ಶರಣುನಾಯಕ ಡೊಣ್ಣಿಗೇರೆ, ಪ್ರಮುಖರಾದ ದೇವಿಂದ್ರ ನಾದ, ಟಿ.ಎನ್.ನಾಯಕ, ಭೀಮನಗೌಡ ಲಕ್ಷ್ಮೀ ಹೆಮನೂರು, ಸಂದೀಪ ಜೋಶಿ, ರಾಜಾ ಹನುಮಪ್ಪ ನಾಯಕ, ಡಾ.ಸುರೇಶ್ ಸಜ್ಜನ್, ಮಂಜುನಾಥ ಚೆಟ್ಟಿ, ಭೀಮುನಾಯಕ ಮಲ್ಲಿಬಾವಿ, ವೇಣುಗೋಪಾಲ ಜೇವರ್ಗಿ, ಯಲ್ಲಪ್ಪ ದೇವತ್ಕಲ್, ನಾಗರಾಜ ಪ್ಯಾಪಲಿ, ನಿಂಗಣ್ಣ ಬಿಜಾಸಪುರ, ಹೆಚ್.ಸಿ.ಪಾಟೀಲ್, ದೇವಿಂದ್ರಪ್ಪ ಬೇವಿನಕಟ್ಟಿ, ಸಂಗಣ್ಣ ಶರಣುನಾಯಕ ಬೈರಿಮಡ್ಡಿ, ರಾಜಾ ರಂಗಪ್ಪ ನಾಯಕ, ಬಸವರಾಜ ಮೇಲಿನಮನಿ, ನರಸಿಂಹಕಾಂತ ರಾಜಾ ಜೈರಾಮ ನಾಯಕ, ಭೀಮಣ್ಣ ಬೇವಿನಾಳ, ಪಂಚಮಗಿರಿ, ಗುರು ಕಾಮಾ, ಮೇಲಪ್ಪ ಗುಳಗಿ, ಶಂಕರ ಯನಾಕ ಮಲ್ಲು ಕವಡಿಮಟ್ಟಿ, ಶ್ರೀಶೈಲ ಕೆಂಭಾವಿ, ಯಲ್ಲಪ್ಪ ನಾಯಕ, ಸಿದ್ಧನಗೌಡ ಕರಿಬಾವಿ, ರಾಜು ಹವಲ್ದಾರ, ಹುಲಕಲ್, ಶ್ರೀನಿವಾಸ ದರಬಾರಿ, ಚಂದ್ರು ಮಡಿವಾಳರ, ಬಲಭೀಮ ನಾಯಕ ಬೈರಿಮಡ್ಡಿ, ಡಾ.ಉಪೇಂದ್ರ ನಾಯಕ ಸಂಗನಗೌಡ ಪಾಟೀಲ್ ಹಣಮಗೌಡ ಶಖಾಪುರ, ಸುಬೇದಾ‌ರ್, ವೆಂಕಟೇಶನಾಯಕ ಬೈರಿಮಡ್ಡಿ, ಲಕ್ಷ್ಮೀಕಾಂತ ಶ್ರೀಶೈಲ ಕಾಚಾಪುರ, ದೇವಿಂದ್ರಪ್ಪಗೌಡ ಮಾಲಗತ್ತಿ ಸೇರಿ ಬಿರಾದಾರ್ ದೇವರಗೋನಾಲ, ಗಂಗಾಧರ ನಾಯಕ ಕನ್ನಡ ಪರ ಸಂಘಟನೆಯವರು, ಅಲ್ಪ ಸಂಖ್ಯಾತ ಅರಳಹಳ್ಳಿ, ಮೌನೇಶ ದೇವರಗೋನಾಲ, ಶರಣು ಮುಖಂಡರು ಸೇರಿ ಅನೇಕರಿದ್ದರು

Leave a Reply

Your email address will not be published. Required fields are marked *

error: Content is protected !!