ನಮ್ಮ ಕರ್ನಾಟಕ ಸೇನೆ ಕಟ್ಟಡ ಕಾರ್ಮಿಕರ ಸುರಪುರ ಘಟಕಕ್ಕೆ ಹುಸೇನ್ ಬಾಷ ಉಪಾಧ್ಯಕ್ಷ

ಸುರಪುರ ಟೈಮ್ಸ್ ವಾರ್ತೆ

ಸುರಪುರ; ರಾಜ್ಯಾಧ್ಯಕ್ಷರ ಶ್ರೀ ಎಂ. ಬಸವರಾಜ್ ಪಡುಕೋಟೆ ಆದೇಶದ ಮೇರೆಗೆ ನಮ್ಮ ಕರ್ನಾಟಕ ಸೇನೆಯ ಉಪಾಧ್ಯಕ್ಷರು, ಕಟ್ಟಡ ಕಾರ್ಮಿಕರ ಘಟಕ ಸುರಪುರಕ್ಕೆ ಹುಸೇನ್ ಬಾಷ ಅವರನ್ನು, ಈ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿದ್ದು, ಸಂಘಟನೆಯನ್ನು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಸಾಮಾಜಿಕ ಕಳಕಳಿಯೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಸಮಾಜಮುಖಿ ಹಾಗೂ ಸಮಾಜಪರ ಕೆಲಸ ಕಾರ್ಯಗಳನ್ನು ನಿರ್ವಹಿಸಲು ನಮ್ಮ ಕರ್ನಾಟಕ ಸೇನೆ ನಿಯಮಾವಳಿ ಪ್ರಕಾರ ನೇಮಕ ಮಾಡಿರುತ್ತೇವೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
