ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ ಎಲ್ಲರೂ ಕೂಡಿಕೊಂಡು ಸಂಘ ಕಟ್ಟೋಣ; ಸಂಕೀನ್ |
ಮಾಧ್ಯಮಗಳ ಮೇಲಿನ ಸವಾರಿ ಆತಂಕಕಾರಿ ಪತ್ರಕರ್ತನ ಮೇಲಿನ ಪ್ರಕರಣ ರದ್ದಿಗೆ ಸಂಕೀನ್ ಆಗ್ರಹ |
ಪತ್ರಕರ್ತರ ಮಕ್ಕಳಿಗೆ ಖಾಸಗಿ ಶಾಲಾ ಮತ್ತು ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ ಕೋರಿಕೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮನವಿ| ಶೇ. 50ರಷ್ಟು ಶುಲ್ಕ ವಿನಾಯಿತಿಗೆ ಆಗ್ರಹ; ಸಂಕೀನ್ |
ಬೋನ್ಹಾಳ ಗ್ರಾಮದ ಶ್ರೀಶೈಲ ಮಾಲಗತ್ತಿ ವಿದ್ಯಾರ್ಥಿಯ ಅಸಾಧಾರಣ ಸಾಧನೆ: 614 ಅಂಕಗಳೊಂದಿಗೆ 98% ಕ್ಕೂ ಅಧಿಕ ಫಲಿತಾಂಶ — ಗ್ರಾಮಕ್ಕೆ ಹೆಮ್ಮೆ |
ಶ್ರೀ ಶೈಲ ಜಗದ್ಗುರುಗಳಿಂದ ಶ್ರೀ ಅಮರೇಶ್ವರ ಗುರು 21 ಪುಣ್ಯಸ್ಮರಣೆ ಹಾಗೂ ಗುರು ಪಟ್ಟಾಧಿಕಾರ ಮಹೋತ್ಸವದ ಪೋಸ್ಟರ್ ಬಿಡುಗಡೆ. |
ಸುರಪುರ: ಕುಡಿದ ಮತ್ತಿನಲ್ಲಿ ಗಂಡ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಮವಾರ ನಸುಗಿನ ಜಾವ 1 ಗಂಟೆಗೆ ನಗರದ ಡೊಣ್ಣೀಗೇರಿ ಬಡಾವಣೆಯಲ್ಲಿ ನಡೆದಿದೆ. ಮರೆಮ್ಮ ಸಂಗಪ್ಪ ರಾಜವೋಳ (3೦) ಕೊಲೆಗೀಡಾದ ನತದೃಷ್ಟೆ ಎಂದು ಗುರುತಿಸಲಾಗಿದೆ. ಮರೆಮ್ಮಳನ್ನು ಕಕ್ಕೇರಾದ ಸಾ; ಹಿರೇಹಳ್ಳದ ಸಂಗಪ್ಪ ರಾಜವೋಳ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಕೊಲೆ ಆರೋಪಿ ಸಂಗಪ್ಪ ರಾಜವೋಳ ಕುಡಿತದ ಚಟಕ್ಕೆ ಬಿದಿದ್ದ. ಈ ವಿಷಯದಲ್ಲಿ ಗಂಡ ಹೆಂಡತಿಯ ನಡುವೆ ಮೇಲಿಂದ ಮೇಲೆ ಜಗಳ ನಡೆಯತಿತ್ತು. ಗಂಡನ ಚಟದಿಂದ ಬೇಸತ್ತಿದ್ದ ಮರೆಮ್ಮ ಕಳೆದ ಕೆಲ ದಿನಗಳಿಂದ ಸುರಪುರದ ಡೊಣ್ಣೀಗೇರಿಯ ತವರು ಮನೆ ಸೇರಿದ್ದಳು. ಸೋಮವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಸಂಗಪ್ಪ ಕುಡಿದ ಅಮಲಿನಲ್ಲಿ ಹೆಂಡತಿ ಮರೆಮ್ಮಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಘಟನೆ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.