ಕನ್ನೆಳ್ಳಿಯಲ್ಲಿ ಇಂದು “NRG ಕಬ್ಬಡ್ಡಿ ವೈಭವ” ಹೊನಲು ಬೆಳಕಿನ ಪಂದ್ಯಾವಳಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ಬಿಜೆಪಿ ರಾಜ್ಯ ಉಪಾಧ್ಯಕ್ಷ ,ಮಾಜಿ ಸಚಿವ ನರಸಿಂಹ ನರಸಿಂಹ ನಾಯಕ ನಾಯಕ (ರಾಜುಗೌಡ) ಹಾಗೂ ಹಣಮಂತ ನಾಯಕ (ಬಬ್ಬುಗೌಡ)
ಇವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮದಲ್ಲಿ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾದಗಿರಿ ಜಿಲ್ಲಾ ಪಂ ಮಾಜಿ ಅದ್ಯಕ್ಷ
ರಾಜಾ ಹಣಮಪ್ಪ ನಾಯಕ ( ತಾತ) ವಹಿಸುವರು.
ಉದ್ಘಾಟಕರಾಗಿ ಮಾಜಿ ಸಚಿವರು ಬಿಜೆಪಿ ರಾಜ್ಯ ಉಪಾಧ್ಯಕ್ಷರು ನರಸಿಂಹ ನಾಯಕ ( ರಾಜುಗೌಡ) ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪ್ರಥಮ ದರ್ಜೆ ಗುತ್ತಿಗೆದಾರರು ಬಿಜೆಪಿ ಮುಖಂಡರುಬಸನಗೌಡ ಎಮ್ ಅಳ್ಳಿಕೋಟಿ ರಾಜನ ಕೋಳೂರು,ಬಿಜೆಪಿ ಯುವ ಮುಖಂಡರು
ಬಲಭೀಮನಾಯಕ ಬೈರಮಡ್ಡಿ,ಮಲ್ಲು ದಂಡಿನ್ ಪುರಸಭೆ ಸದಸ್ಯರು ಕಕ್ಕೇರಾ, ಕೃಷ್ಣ ರೆಡ್ಡಿ ಮುದನೂರು ಬಿಜೆಪಿ ಯುವ ಮುಖಂಡರು ಭಾಗವಹಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

