ಬೆಳೆ ಹಾನಿ: ಪರಿಹಾರ ನೀಡಲು ಕೃಷ್ಣರಡ್ಡಿ ಮುದನೂರು ಆಗ್ರಹ

ಸುರಪುರ ಟೈಮ್ಸ್ ವಾರ್ತೆ

ಸುರಪುರ:ಸುರಪುರ ಮತ್ತು ಹುಣಸಗಿ ತಾಲ್ಲೂಕಿನಲ್ಲಿ ಇತ್ತೀಚೆಗೆ ನಿನ್ನೆ ರಾತ್ರಿ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದಲ್ಲಿ ರೈತರ ಬೆಳೆ ನಷ್ಟವಾಗಿದ್ದು ಸರ್ಕಾರ ತಕ್ಷಣ ಬೆಳೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದುಬಿಜೆಪಿ ಯುವ ಮುಖಂಡ ಕೃಷ್ಣರಡ್ಡಿ ಮುದನೂರ ಆಗ್ರಹಿಸಿದ್ದಾರೆ.
ಶನಿವಾರ  ರಾತ್ರಿ ‌ತಾಲೂಕಿನ ಹಲವು ಗ್ರಾಮಗಳಲ್ಲಿ ಮಳೆಯಿಂದ ನೆಲಕಚ್ಚಿರುವ ಭತ್ತ ಬೆಳೆಯುವ ಸಂಪೂರ್ಣವಾಗಿ ಹಾನಿಗೊಳಗಾಗಿವೆ. ನೂರಾರು ಹೆಕ್ಟೇರ್‌ನಲ್ಲಿನ ಭತ್ತ ಹಾಗೂ ಇತರೆ ಬೆಳೆಗಳು ನೆಲಕ್ಕೆ ಉರುಳಿ ರೈತರಿಗೆ ಅಪಾರ ಪ್ರಮಾಣದ ನಷ್ಟವನ್ನು ಉಂಟುಮಾಡಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ನಿಖರ ಮಾಹಿತಿಯನ್ನು ಪಡೆದು ಸರಕಾರಕ್ಕೆ ಸಲ್ಲಿಸಿ ಆದಷ್ಟು ಬೇಗನೆ ಪರಿಹಾರ ನೀಡಬೇಕು ಎಂದು ಪತ್ರಿಕೆಯ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

ಪೋಟೊ : ಯುವ ಮುಖಂಡ ಕೃಷ್ಣರಡ್ಡಿ ಮುದನೂರು  ನೆಲಕಚ್ಚಿರುವ ಭತ್ತ ಬೆಳೆ

Leave a Reply

Your email address will not be published. Required fields are marked *

error: Content is protected !!