ಹಗರಟಗಿ ಗ್ರಾಮದ ತೋಗರಿ ಖರೀದಿ ಕೇಂದ್ರದ ಪ್ರಯೋಜನ ಪಡೆದುಕೊಳ್ಳಿ
ಸುರಪುರ ಟೈಮ್ಸ್ ವಾರ್ತೆ
ಹುಣಸಗಿ ;ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಹಗರಟಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ವತಿಯಿಂದ ಹಗರಟಗಿ ಗ್ರಾಮದಲ್ಲಿ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ಮಾಡಲಾಯಿತು.
ಹಗರಟಗಿ,ಬೂದಿಹಾಳ, ಕರೆಕಲ್ಲ ಹೊರಹಟ್ಟಿ ಗ್ರಾಮಗಳ ರೈತರ ಅನುಕೂಲಕ್ಕಾಗಿ ಆರಂಭಿಸಲಾಗಿದೆ ಖರೀದಿ ಕೇಂದ್ರ ಸದುಪಯೋಗ ಪಡೆದುಕೋಳಬೇಕು ಎಂದು ಯುವ ಮುಖಂಡರಾದ ಅರುಣ ಕುಮಾರ ಮಲ್ಕಾಪುರ ಹೇಳಿದರು
ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಬಸಲಿಂಗಪ್ಪ ಎಮ್ ಮಲಕಾಪುರ್ ಮುಖಂಡರಾದ ಅರುಣ ಕುಮಾರ ಮಲ್ಕಪುರ, ಬಸಣ್ಣ ಸಜ್ಜನ ನಾಗಣ್ಣ ಪಾಟೀಲ್, ಬಸವರಾಜ್ ಗದ್ದಿಗೌಡ್ರ, ನಂದನಗೌಡ ಪಿ ಪಾಟೀಲ್, ಗುರಣ್ಣಗೌಡ ಬಿರಾದಾರ, ಅಶೋಕ ಪಾಟೀಲ್ ಜಗದೀಶ್ ಪಿ ಪಾಟೀಲ್,ಬಸನಗೌಡ ಕಡಕಲ್ಲ, ಬಸನಗೌಡ ದನ್ನೂರ, ಸುರೇಂದ್ರ ಮಲಕಾಪುರ್, ಮಲ್ಲಿಕಾರ್ಜುನ ಮ್ಯಾಕಲಾದೊಡ್ಡಿ, ವಿರೂಪಾಕ್ಷ ಏರುಂಡಿ,ಸುಭಾಸ ಸಜ್ಜನ್,ಮುದ್ದಕಣ್ಣ ಪಿರಾಪುರ, ಮಲ್ಲು ದೇಸಾಯಿ,ನಿಜಪ್ಪ ತಳವಾರ, ಗ್ರಾಮದ ಮುಖಂಡರು ರೈತರು ಉಪಸ್ಥಿತರಿದ್ದರು.
